ಶನಿವಾರ, ಮೇ 13, 2017

ಬೆಂಗಳೂರಿನ ಪತ್ರಕರ್ತ ಸಿ ಟಿ ಜೋಶಿಯವರ “ಸುದ್ದಿಗಾಗಿ ಸ್ವಾಭಿಮಾನದ ಬಲಿ?” ಗ್ರಂಥ ಬಿಡುಗಡೆ

ಇಂದಿನ ಮಾಧ್ಯಮ: ಒಂದು ಇಣುಕು ನೋಟ
ಇಂದಿನ ಮಾಧ್ಯಮದ (ಮುದ್ರಣ ಹಾಗೂ ವಿದ್ಯುನ್ಮಾನ ಎರಡೂ) ಬಗೆಗೆ ಆಳವಾದ, ನಿರ್ವಿಕಾರವಾದ ವಿಚಾರ ವಿನಿಮಯ ನಡೆಸಲು, ಅನುಭವಗಳನ್ನು ಹಂಚಿಕೊಳ್ಳಲು ಅದೊಂದು ಸಂದರ್ಭವಾಗಿತ್ತು. ಕಳೆದ ಹಲವಾರು ದಶಕಗಳಲ್ಲಿ ಭಾರತೀಯ ಮಾಧ್ಯಮರಂಗ ಗುರುತಿಸಲಾರದಷ್ಟು ಅಜಗಜಾಂತರ ವ್ಯತ್ಯಾಸ ಹೊಂದಿದೆ ಎಂಬುದು ಅದರಲ್ಲಿ ಭಾಗವಹಿಸಿದವರ ಅಭಿಪ್ರಾಯವಾಗಿತ್ತು.


ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸುತ್ತಿರುವ ದೃಶ್ಯ

'ಮಾಧ್ಯಮದಲ್ಲಿ ಮುಂದಿನ ಆರೋಗ್ಯಕರ ಬೆಳವಣಿಗೆಗೆ ಅನುಕೂಲಕರವಾದ ಸಕಾರಾತ್ಮಕ ಬದಲಾವಣೆಗಳಿವೆ. ಆದರೆ ಅಷ್ಟೇ (ಬಹುಶಃ ಇನ್ನೂ ಹೆಚ್ಚು) ನಕಾರಾತ್ಮಕವಾದ, ಅದರ ಮುಂದಿನ ಏಳಿಗೆಗೆ ಪ್ರತಿಕೂಲಕರವಾದ ಬದಲಾವಣೆಗಳೂ ಇವೆ. ಸ್ವಾತಂತ್ರ್ಯಪೂರ್ವ ನಮ್ಮ ಮಾಧ್ಯಮಕ್ಕೆ ಒಂದು ಉದಾತ್ತ ಧ್ಯೇಯೋದ್ದೇಶವಿತ್ತು. ತದನಂತರ ಅದು ಸಂಪರ್ಕ ಹಾಗೂ ಮಾಹಿತಿ ಪ್ರಸಾರದ ಸಮೂಹ ಸಾಧನವಾಯಿತು. ಈಗ ಅದು ಅಪ್ಪಟ ವ್ಯಾಪಾರವಾಗಿದೆ' ಎಂದು ಪ್ರತ್ಯೇಕ ಭಾಷಣಗಳಲ್ಲಿ ವೇದಿಕೆಯನ್ನಲಂಕರಿಸಿದ ಗಣ್ಯರೆಲ್ಲರೂ ಒಮ್ಮತದಿಂದ ನುಡಿದು, ಮಾಧ್ಯಮರಂಗ ಮತ್ತೆ ತನ್ನ ಮೊದಲಿನ ಉಚ್ಛ್ರಾಯದ ದಿನಗಳನ್ನು ನೋಡುವ ಸಮಯ ಬಂದೇ ಬರುವುದೆಂಬ ಭರವಸೆ ವ್ಯಕ್ತ ಪಡಿಸಿದರು.

ಬೆಂಗಳೂರಿನ ಪತ್ರಕರ್ತ ಸಿ ಟಿ ಜೋಶಿಯವರು ಬರೆದ “ಸುದ್ದಿಗಾಗಿ ಸ್ವಾಭಿಮಾನದ ಬಲಿ?” ಕನ್ನಡ ಪುಸ್ತಕದ ವೈಭವಪೂರ್ಣ ಹಾಗೂ ಘನತೆಯ ಲೋಕಾರ್ಪಣೆಗೊಳಿಸಿದ ಸಂದರ್ಭವದು. ಇಂದಿನ ಮಾಧ್ಯಮರಂಗದ ಸಮಗ್ರವಾದ, ವಸ್ತುನಿಷ್ಠವಾದ ಸಿಂಹಾವಲೋಕನಕ್ಕೆ ಸೀಮಿತವಾದ ಗ್ರಂಥವದು.


ವೇದಿಕೆಯ ಮೇಲೆ ಸಿ.ಟಿ.ಜೋಶಿ, ಬಿ.ಎನ್.ಗರುಡಾಚಾರ್, ಸಿ.ಎಂ.ರಾಮಚಂದ್ರ, 
ರಾಮ ಜೋಯಿಸ್, ಎಚ್.ಎನ್.ಸುರೇಶ, ಬಿ.ಕೆ.ರವಿ, 
ಜಿ.ಗೌತಮ್ ಹಾಗೂ ಹರಿಶ್ಚಂದ್ರ ಭಟ್.

ಲೋಕಾರ್ಪಣೆ ಸಮಾರಂಭವನ್ನು ಪ್ರಕಾಶನ ಸಂಸ್ಥೆ ಯುರೇಕಾ ಪಬ್ಲಿಕೇಶನ್ ಹಾಗೂ ಭಾರತೀಯ ವಿದ್ಯಾ ಭವನ, ಮೇ 9, 2017 ರಂದು ಜಂಟಿಯಾಗಿ ಆಯೋಜಿಸಿದ್ದವು.

ಈ ಸಮಾರಂಭದ ಮುಖ್ಯ ಅತಿಥಿ ಪೀಠವನ್ನು ಜಾರ್ಖಂಡ ರಾಜ್ಯದ ಹಿಂದಿನ ರಾಜ್ಯಪಾಲರೂ, ಪಂಜಾಬ - ಹರಿಯಾಣಾ ಪ್ರಮುಖ ನ್ಯಾಯಾಲಯದ ಹಿಂದಿನ ಮುಖ್ಯ ನ್ಯಾಯಾಧೀಶರೂ ಆದ ಜಸ್ಟಿಸ್ ರಾಮ ಜೋಯಿಸ್ ಅಲಂಕರಿಸಿದ್ದರು. ವೇದಿಕೆಯ ಮೇಲಿದ್ದ ಇತರ ಗಣ್ಯರೆಂದರೆ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಹಾಗೂ ಅದರ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಬಿ ಕೆ ರವಿ, ಪುಸ್ತಕಕ್ಕೆ ಮುನ್ನುಡಿ ಬರೆದ ಬಿ ಎನ್ ಗರುಡಾಚಾರ್ (ಕರ್ನಾಟಕದ ಹಿಂದಿನ ಪೊಲೀಸ್ ಮಹಾ ನಿರ್ದೇಶಕರು), ಹಾಗೂ ಗೌರವಾನ್ವಿತ ಪತ್ರಕರ್ತ-ಲೇಖಕ ಸಿ ಎಮ್ ರಾಮಚಂದ್ರ ಅವರು. ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಎಚ್ ಎನ್ ಸುರೇಶ ಅಧ್ಯಕ್ಷತೆ ವಹಿಸಿದ್ದರು.


ಸಿ ಟಿ ಜೋಶಿಯವರು ಮಾತನಾಡುತ್ತಿರುವುದು

ಜೋಶಿಯವರು ತಮ್ಮ ಹಾಗೂ ತಮ್ಮ ಸಹೋದ್ಯೋಗಿಗಳ ವೃತ್ತಿ ಜೀವನದಲ್ಲಿ ನಡೆದಿರುವ ಅನೇಕ ಘಟನೆ-ಪ್ರಸಂಗಗಳನ್ನು ಉಲ್ಲೇಖಿಸಿ ಮಾಧ್ಯಮ ರಂಗದ ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳವಣಿಗೆಗಳನ್ನು ವಿವರಿಸಿದರು. ಪ್ರಕಾಶಕ ಜಿ. ಗೌತಮ್ ಸ್ವಾಗತಿಸಿದರು. ಹೆಸರಾಂತ ಚಲನಚಿತ್ರ ನಿರ್ದೇಶಕ ಎಸ್ ಎ ರವೀಂದ್ರನಾಥ್ ನಿರೂಪಣೆ ಮಾಡಿದರು. ಹಿರಿಯ ಪತ್ರಕರ್ತ ಬಿ ಹರಿಶ್ಚಂದ್ರ ಭಟ್ ಪುಸ್ತಕಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಓದಿ, ವಂದನಾರ್ಪಣೆ ಸಲ್ಲಿಸಿದರು.

ಪುಸ್ತಕದಲ್ಲಿ ಬಂದಿರುವ ಕೆಲವು ಪ್ರಮುಖ ವಿಷಯ-ವಿಚಾರ-ಅನಿಸಿಕೆಗಳು:

ನಿಖರವಾದ, ಯಥಾರ್ಥವಾದ, ಹಾಗೂ ಸಮಗ್ರವಾದ ವಸ್ತುನಿಷ್ಠವಾದ ಸಿಂಹಾವಲೋಕನ.
ಸಾಧ್ಯವಿದ್ದಷ್ಟು ದಿನಾಂಕ ಮುಂತಾದ ವಿವರಗಳೊಂದಿಗೆ ನಿಜವಾದ ವರದಿಗಳ, ಪ್ರಸಂಗಗಳ ಬಳಕೆ.
ಮಾನವೀಯತೆಯನ್ನು, ಉನ್ನತ ಪತ್ರಿಕಾಧರ್ಮವನ್ನು ಎತ್ತಿ ಹಿಡಿಯುವ ಪತ್ರಕರ್ತರ, ಮಾಧ್ಯಮಗಳ ಕೊಡುಗೆಯ ಸ್ಮರಣೆ.
ಅಹಿತಕರವಾದ, ಪ್ರತಿಕೂಲಕರವಾದ ಸಂಗತಿಗಳ ಮುಲಾಜಿಲ್ಲದ ವಿಮರ್ಶೆ.
ಸುದ್ದಿಗಾಗಿ ಸ್ವಾಭಿಮಾನವನ್ನೂ ಬಲಿ ಕೊಟ್ಟವರ, ಸ್ವಾಭಿಮಾನಕ್ಕಾಗಿ ತಮ್ಮ ವೃತ್ತಿಭವಿಷ್ಯವನ್ನೇ ಬಲಿ ಕೊಟ್ಟವರ, ದನಿಯಿಲ್ಲದವರಿಗೆ ದನಿಯಾದವರ, ದನಿಯಾಗಬೇಕಾದರೂ ಆಗದವರ ಉದಾಹರಣೆಗಳು.
ನಮ್ಮ ವೃತ್ತಿಯಲ್ಲಿ ನಡೆದ ಮಾರ್ಮಿಕ, ಸ್ವಾರಸ್ಯಕರ, ಬೋಧಪ್ರದ ಘಟನೆಗಳ ಪ್ರ್ರಸ್ತಾಪ.
ಭಾರತೀಯ ಪತ್ರಿಕಾ ಮಂಡಳಿಯ ಅಭಿಪ್ರಾಯಗಳ, ಅದರ ಕಾರ್ಯನಿರ್ವಹಣೆಯ, ಮಂಡಳಿಯ ಕೈಬಲಪಡಿಸುವ ಅಗತ್ಯದ, ಅದು ರೂಪಿಸಿರುವ, ಇಂದು ನಮಗೆ ಅವಶ್ಯವಾಗಿ ಬೇಕಿರುವ ಮಾರ್ಗಸೂಚಿಗಳ ವಿಪುಲವಾದ ಉಲ್ಲೇಖ.
ಇತಿ-ಮಿತಿಗಳಿಲ್ಲದ, ಹಿತ-ಮಿತವಾದ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ, ಮೌಲ್ಯಗಳನ್ನು ಮತ್ತೆ ತರಲು ಮಾಧ್ಯಮದವರಿಂದ ಆತ್ಮಾವಲೋಕನಕ್ಕಾಗಿ, ಸ್ವಯಂನಿಯಂತ್ರಣಕ್ಕಾಗಿ ಆಗ್ರಹ.

 ಪುಸ್ತಕದಲ್ಲಿ ಬಂದಿರುವ ಕೆಲವು ನಿದರ್ಶನಗಳು:

ಒಂದು ಲೋಕ ಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಮತಎಣಿಕೆಯ ಕೇಂದ್ರಕ್ಕೆ ರಾಜ್ಯದ ಮಾಜಿ ಮುಖ್ಯ ಮಂತ್ರಿಯೊಬ್ಬರ ಹಠಾತ್ ಆಗಮನ. ಟಿವಿ ಕೆಮರಾಗಳ ಮುಂದೆ ತಮ್ಮ ಮೋಹಕ ವಿಖ್ಯಾತ ನಗೆಯೊಂದಿಗೆ ಪ್ರತಿಕ್ರಿಯೆ. ಮುದ್ರಣ ಮಾಧ್ಯಮದವರತ್ತ ತಿರುಗಿಯೂ ನೋಡದೆ, ಶಿಷ್ಟಾಚಾರದ ಸಲುವಾಗಿಯಾದರೂ ಒಂದು ಮಾತನ್ನಾಡದೆ, ಅಸಡ್ಡೆಯಿಂದ ಬಿರುಬಿರನೆ ಹೊರಟೇಬಿಟ್ಟರು. ಮುದ್ರಣ ಮಾಧ್ಯಮದವರು ಈ ಅವಮಾನವನ್ನು ನುಂಗಿಕೊಂಡೂ ಅವರ ಹಿಂದೆ ಓಡಿದರು.



ವ್ಯಂಗ್ಯ ಚಿತ್ರ: ವಾಮನ್

2011 ಕೊನೆಗೆ ಕೇಂದ್ರ ಸರಕಾರ ಬಹು ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ FDI ಗೆ ಅನುಮತಿ ನೀಡಿದಾಗ ಜನರಿಗೆ ತಿಳಿಯಬೇಕಾದದ್ದು ಈ ನಿರ್ಧಾರದಿಂದ ತಮ್ಮ ಮೇಲೆ ಏನು ಪರಿಣಾಮ? ಒಬ್ಬ ಹಿರಿಯ ಅಂಕಣಕಾರರು ಈ ನಿರ್ಧಾರದ ರಾಜಕೀಯ ಹಿನ್ನೆಲೆಯ ಬಗ್ಗೆ ಮಾತ್ರ ಬರೆದರು. ಜನ-ಸಾಮಾನ್ಯರ ಮೇಲಾಗುವ ಪರಿಣಾಮ ಅವರ ಕಣ್ಣಿಗೆ ಬಿದ್ದಂತೆ ಕಾಣಲಿಲ್ಲ.

ಬೆಂಗಳೂರಿನ ಹತ್ತಿರದ ಬಸವಪುರದಲ್ಲಿ ಒಂದು ಕಲ್ಲುಗಣಿಯ ಸುಮಾರು 300 ಮಂದಿ ಕಾರ್ಮಿಕ ಜೀತದಾಳುಗಳ ನಿಜವಾಗಿಯೂ ನಡೆದ ಬವಣೆಯನ್ನು ಸ್ಟಿಂಗ್ ಆಪರೇಶನ್ ಮೂಲಕ ಮಾಧ್ಯಮದವರು ಬೆಳಕಿಗೆ ತಂದರು. ಆದರೆ ಭಾಜಪದ ಒಬ್ಬ ಹಳೆಯ ಅಧ್ಯಕ್ಷ ಬಂಗಾರು ಲಕ್ಷ್ಮಣ ಅವರನ್ನು ಲಂಚಗುಳಿತನ ಪ್ರಕರಣದಲ್ಲಿ ಸಿಕ್ಕಿಸಲು ನಡೆಯದಿರುವ ಘಟನೆಯ ಅಣಕು ಸ್ಟಿಂಗ್ ಆಪರೇಶನ್ ನಡೆಸಲಾಯಿತು ಎಂದು ಆಪಾದಿಸಲಾಗುತ್ತದೆ.

70ರ ದಶಕದ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರಿನಿಂದ ಉಪಚುನಾವಣೆಯಲ್ಲಿ ಲೋಕ ಸಭೆಗೆ ಆಯ್ಕೆಯಾದರು. ಇಂದಿರಾ ಗೆಲ್ಲುವ ಚಾನ್ಸ್ ಇದ್ದುದು ಆಗ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪಾದಕರಾದ, ತುರ್ತು ಪರಿಸ್ಥಿತಿಯನ್ನು ಬಲವಾಗಿ ವಿರೋಧಿಸಿ ಜೈಲಿಗೆ ಹೋದ ದಿಟ್ಟ ಪತ್ರಕರ್ತ ವಿ ಕೆ. ನರಸಿಂಹನ್‍ರಿಗೆ ನಿರಾಸೆ ಮಾಡಿದ್ದು ಸಹಜವೇ. ಆದರೆ ಉಪಚುನಾವಣಾಪೂರ್ವ ಸಮೀಕ್ಷೆಯ ನನ್ನ ವರದಿಯನ್ನು, ನನಗೆ ಗೊತ್ತಿಲ್ಲದಂತೆ, ಇಂದಿರಾರವರಿಗೆ ಸ್ವಲ್ಪ ಪ್ರತಿಕೂಲವಾಗುವಂತೆ ಬದಲಿಸಿದ್ದಕ್ಕಾಗಿ ತಮ್ಮ ಸಹಾಯಕ ಸಂಪಾದಕರನ್ನು ನರಸಿಂಹನ್ ತರಾಟೆಗೆ ತೆಗೆದುಕೊಂಡರು.

ಒಂದು ಚುನಾವಣೆ ಸಮಯ ಒಬ್ಬ ಮಧ್ಯ ವಯಸ್ಸಿನ ಮಹಿಳಾ ಚುನಾವಣಾಧಿಕಾರಿ ಮತಗಟ್ಟೆಗೆ ನಡೆದಿದ್ದಳು. ಹೆಗಲ ಮೇಲೆ ಭಾರವಾದ ಮತಯಂತ್ರಗಳು. ಏದುಸಿರು ಬಿಡುತ್ತಿದ್ದಳು. ಇಂಥ ಮಾನವೀಯ ಘಟನೆಗಳಿಗಿಂತ ಹೆಚ್ಚು ಮಹತ್ವ ಪಡೆದದ್ದು ನಮ್ಮ ನಾಯಕರು ಮತಗಟ್ಟ್ಟೆಗಳಿಗೆ ಹೋಗಿ ಮತ ಹಾಕುವ, ಸುದ್ದಿಯ ಲವಲೇಶವೂ ಇಲ್ಲದ, ಅರ್ಥಹೀನವಾದ ಸರ್ವೇಸಾಮಾನ್ಯವಾದ ಚಿತ್ರಗಳು.



ವ್ಯಂಗ್ಯ ಚಿತ್ರ: ವಾಮನ್

2010ರ ಮಧ್ಯದಲ್ಲಿ ನಕ್ಷಲೀಯರು ಒಂದು ರೈಲ್ವೇ ಸ್ಟೇಶನ್ನಿನ ಮೇಲೆ ದಾಳಿ ನಡೆಸಿ ಅದರ ಸ್ಟೇಶನ್ ಮಾಸ್ತರರನ್ನು ಅಪಹರಿಸಿದರು. ಒಬ್ಬ ಯಃಕಶ್ಚಿತ್ ಸ್ಟೇಶನ್ ಮಾಸ್ತರ ತಾನೇ? ಅವರ ಜೀವಕ್ಕೆ ಏನು ಬೆಲೆ? ಪತ್ರಿಕೆಗಳಲ್ಲಿ ಬರುವ ಫಿಲರ್‍ಗಳಿಗೆ ಇರುವ ಬೆಲೆ. ಅವರ ಅಪಹರಣ ಪ್ರಕಟಗೊಂಡದ್ದು ಫಿಲರ್ ಎಂದೇ!

ಒಬ್ಬ ಪತ್ರಕರ್ತರು (ಅವರು ಇಂದಿಲ್ಲ.) ಒಂದು ದಿನ ತಮ್ಮ ಪತ್ರಿಕೆಗೆ ಅಪರಾಧ ವರದಿಗಳನ್ನು ಕಲೆ ಹಾಕಲು ತಮ್ಮ ಸೋದರ ಪತ್ರಿಕೆಯ ಅಪರಾಧ ವರದಿಗಾರರನ್ನು ಸಂಧಿಸಿದರು. ಸೋದರ ಪತ್ರಿಕೆ ವರದಿಗಾರರು ತಮಾಷೆಯಿಂದ “ಇವತ್ತು ನೀವೇನಾ ಕ್ರಿಮಿನಲ್?” ಎಂದರು. ತಕ್ಷಣ “ಹಂಗಾಮಿ ಅಪರಾಧ ವರದಿಗಾರರು” ಕೋಪದಿಂದ ದಪ್‍ದಪ್ ಎಂದು ಕಾಲು ಬಡಿಯುತ್ತ ಹೊರಟೇ ಹೋದರು. ಬೇರೆ ಬೇರೆ ಪತ್ರಿಕೆಗಳಲ್ಲಿ ನಿಯಮಿತವಾಗಿ ಅಪರಾಧ ವರದಿ ಮಾಡುತ್ತಿದ್ದ ಪತ್ರಕರ್ತರು ತಮಾಷೆಯಿಂದ ಒಬ್ಬರನ್ನೊಬ್ಬರು ಕ್ರಿಮಿನಲ್ ಎಂದು ಕರೆಯುತ್ತಿದ್ದರು. ಸೋದರ ಪತ್ರಿಕೆಯ ಆ ಸಹೋದ್ಯೋಗಿ ಅಭ್ಯಾಸ ಬಲದಿಂದ ಹಾಗೆಯೇ ಹಾಸ್ಯ ಮಾಡಿದ್ದರು.

“ಬೆಟ್ಟದಾ ಮೇಲೊಂದು ಮನೆಯ ಮಾಡಿ...” ಎಂಬ ವಚನವನ್ನು ಅಕ್ಕ ಮಹಾದೇವಿ ಪತ್ರಕರ್ತರಿಗಾಗಿಯೇ ಬರೆದಂತೆ ಭಾಸವಾಗಬಹುದು. ಈ ವೃತ್ತಿಯನ್ನು ಸೇರಿದ ಮೇಲೆ ಅಪಾಯಗಳಿಗೆ “ಅಂಜಿ-ದೊಡೆ ಎಂತಯ್ಯಾ?”. ಅಪಾಯಗಳಿಗೆ ತಲೆಕೊಟ್ಟು ವರದಿ ಮಾಡುವುದರಲ್ಲಿ ಥ್ರಿಲ್ ಇದೆ. ಅನುಭವಿಸ-ಬೇಕು. ಯಾವ ತರಬೇತಿ ತರಗತಿಗಳಲ್ಲಿಯೂ ಬೋಧಿಸಲಾಗದು.

“ದೇಶವನ್ನು ಸುತ್ತುವುದರಿಂದ, ತಿಳಿದವರ ಸಹವಾಸದಿಂದ ಬುದ್ಧಿಯು ನೀರಿನಲ್ಲಿ ಬಿದ್ದ ಎಣ್ಣೆಯ ಹನಿಯಂತೆ ವಿಸ್ತಾರವಾಗುತ್ತದೆ.”-ಸಂಸ್ಕøತದ ಒಂದು ಸುಂದರ ಲೋಕಾನುಭವದ ಸುಭಾಷಿತ ಹೇಳುತ್ತದೆ. “ಮಾಧ್ಯಮಗಳಿಂದಲೂ ವಿಸ್ತಾರವಾಗುತ್ತದೆ.” ಎಂದು ಸೇರಿಸಬೇಕು.

ಅಷ್ಟು ದೊಡ್ಡದು ಮಾಧ್ಯಮಗಳ ಪಾತ್ರ. ಅಷ್ಟೇ ದೊಡ್ಡದು ಅವುಗಳ ಹೊಣೆಯೂ ಕೂಡ.

* * * *


ಪುಸ್ತಕದ ಮುಖಪುಟ

ಪುಸ್ತಕಕ್ಕೆ ಬಂದ ಕೆಲವು ಸಂದೇಶಗಳು, ಪ್ರತಿಕ್ರಿಯೆಗಳು :

ಡಾ ಎ ಸೂರ್ಯಪ್ರಕಾಶ, ಅಧ್ಯಕ್ಷರು, ಪ್ರಸಾರ ಭಾರತಿ, ದಿಲ್ಲಿ: “ದಶಕಗಳ ಕಾಲ ರಾಜಕೀಯವನ್ನೂ ಆಡಳಿತವನ್ನೂ ತೀರ ಹತ್ತಿರದಿಂದ ನೋಡಿದ ಮಾಧ್ಯಮರಂಗದ ಧೀಮಂತರೊಬ್ಬರು ಈ ಪುಸ್ತಕವನ್ನು ಬರೆದಿದ್ದಾರೆ. ಹೀಗಾಗಿ ಅವರಿಗೆ ಮಾಧ್ಯಮ ಸಂಘಟನೆಗಳ ಹಾಗೂ ಮಾಧ್ಯಮವೃತ್ತಿಯವರ ಆಳವಾದ ಒಳಅರಿವು ಇದೆ.”

ಪಿ ಜಿ ಆರ್ ಸಿಂಧ್ಯ, ಕರ್ನಾಟಕದ  ಮಾಜಿ ಮಂತ್ರಿಗಳು : “ಪತ್ರಿಕಾ ರಂಗದ ಮೌಲ್ಯಗಳು ಕುಸಿಯುತ್ತಿವೆಯೆಂಬ ಆತಂಕವಿರುವ ಈ ಸನ್ನಿವೇಶದಲ್ಲಿ ಪತ್ರಿಕೋದ್ಯಮಿಯಾಗಿ 5-6 ದಶಕಗಳನ್ನು ಕ್ರಮಿಸಿರುವ ತಮ್ಮ ಅನುಭವಗಳು ಮತ್ತು ಸಲಹೆಗಳು ಪತ್ರಿಕೋದ್ಯಮದ ನೈತಿಕತೆಯನ್ನು ಹೆಚ್ಚಿಸಲು ಹಾಗೂ ಯುವ ಪತ್ರಕರ್ತರಿಗೆ ಮಾರ್ಗದರ್ಶಕವಾಗಲು ಸಹಕಾರಿಯಾಗುತ್ತವೆಯೆಂದು ಆಶಿಸುತ್ತೇನೆ.”

ಪ್ರಹ್ಲಾದ ಕುಳಲಿ, ಹಿರಿಯ ಪತ್ರಕರ್ತರು : “ಮಾಧ್ಯಮ ರಂಗದ ಅಂತರಂಗದ ನೈಜ ಚಿತ್ರಣ ಸಿ ಟಿ ಜೋಶಿಯವರ ಈ ಗ್ರಂಥ ವಾಚನದಿಂದ ಕಂಡು ಬರುತ್ತದೆ ಎಂದು ಹೇಳಬಹುದಾಗಿದೆ.”

ರಘುರಾಮ, ಐಟಿ ವೃತ್ತಿಪರರು: “ಪತ್ರಿಕೋದ್ಯಮ. ಅದು ಮತ್ತೆ ಸುವರ್ಣ ಯುಗವನ್ನು ನೋಡೀತೆಂದು ನಾನು ಆಶಿಸುತ್ತೇನೆ”

ವಿಲಾಸ ಕೆ, ಹಿತೈಷಿಗಳು: “ ನನ್ನಂತಹ ಸಾಮಾನ್ಯನಾಗಲೀ, ಪತ್ರಿಕೋದ್ಯಮದ ಗಂಭೀರ ವಿದ್ಯಾರ್ಥಿಯಾಗಲೀ ಇದರಲ್ಲಿ ಕುತೂಹಲಕರವಾದುದನ್ನು ಪ್ರಸ್ತುತವಾದುದನ್ನು ಕಾಣುತ್ತಾರೆ. ಮತ್ತು ತಾದಾತ್ಮ್ಯವಾದುದನ್ನು ಹೊಂದುತ್ತಾರೆ.”

ಶೃತಿ, ಹಿತೈಷಿಗಳು: “ಇಂದಿನ ಸನ್ನಿವೇಶಕ್ಕೆ ತುಂಬ ಪ್ರಸ್ತುತವಾದುದು.”

ಅಲ್ಲದೆ, ಜಿ ಸುಬ್ರಾಯ ಭಟ್, ರಂಗಕರ್ಮಿಗಳು, ವಿಂಗ್ ಕಮಾಂಡರ್ (ನಿವೃತ್ತ) ಜಿ ಬಿ ಅತ್ರಿ , ಹಿರಿಯ ಪತ್ರಕರ್ತರಾದ ಪಿ ರಾಮಯ್ಯ, ಎಸ್‍ ಎಸ್‍ ಎನ್‍ ಶಾಸ್ತ್ರಿ, ಪಾಂಡುರಂಗ ಶಾಸ್ತ್ರ್ತಿ, ಹಿರಿಯ ಮಾಧ್ಯಮ ಶಿಕ್ಷಕ ಡಾ ಹಾಲಸ್ವಾಮಿ ಕೆ ಜಿ, ಹಿರಿಯ ಜಾಹೀರಾತು ವೃತ್ತಿಪರ ಎಸ್‍ ಎಸ್ ದೇಸಾಯಿ, ಇ-ಕಾಮರ್ಸ್ ವೃತ್ತಿಪರ ಜಿ ಆರ್ ರಾಮಚಂದ್ರನ್ ಮತ್ತು ಇವರೆಲ್ಲರೂ ಸಂದೇಶಗಳನ್ನು, ಪ್ರತಿಕ್ರಿಯೆಗಳನ್ನು ಕಳಿಸಿದ್ದರು.

* * * *

ಬುಧವಾರ, ಫೆಬ್ರವರಿ 22, 2017

ಎಸ್.ಎಸ್.ಜೆ. ಪ್ರೊಡಕ್ಷನ್ಸ್

ಬೆಂಗಳೂರು, ಕರ್ನಾಟಕ, ಭಾರತ: ೨೨ನೇ ಫ಼ೆಬ್ರವರಿ ೨೦೧೭
ಪರಿಚಯ:
ಹೆಸರಾಂತ ಧಾರ್ಮಿಕ ಸಂಗೀತ ನಿರೂಪಕ, ಗಾಯಕ, ಗಿಟಾರಿಸ್ಟ್, ಕೀಬೋರ್ಡ್ ಕಲಾವಿದ ಹಾಗೂ ಸಂಗೀತ ನಿರ್ದೇಶಕರಾದ ಸಾಹಿಲ್ ಸೂರಜ್ ಜಗ್ತಿಯಾನಿ ಇಂದು ತಮ್ಮ ಸ್ವಂತ ಸಂಗೀತ ಲಾಂಛನವಾದ ಎಸ್.ಎಸ್.ಜೆ. ಪ್ರೊಡಕ್ಷನ್ಸ್ನ್ನು ಉದ್ಘ್ಹಾಟಿಸುತ್ತಿದ್ದಾರೆ. ಭಜನಾಮೃತ, ಸ್ತೋತ್ರ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ, ಪಾಪ್, ರಾಕ್ ಮತ್ತಿತರ ಶೈಲಿಗಳಲ್ಲಿ ಪ್ರತಿಭೆ ಹೊಂದಿರುವ ಕಲಾವಿದರನ್ನು ಬೆಳಕಿಗೆ ತರುವ ದಿಶೆಯಲ್ಲಿ ಈ ಸಂಸ್ಥೆಯನ್ನು ಮುನ್ನಡೆಸಬೇಕೆಂಬ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ.
ಆರ್ಟ್ ಆಫ಼್ ಲಿವಿಂಗ್ಪ್ರತಿಷ್ಠಾನದಲ್ಲಿ ಹಿರಿಯ ಅಧ್ಯಾಪಕರಾಗಿರುವ ಸಾಹಿಲ್ ಜಗ್ತಿಯಾನಿ, ತಮ್ಮ ಆರಾಧ್ಯ ದೈವ ಗುರುದೇವ ಶ್ರೀ ಶ್ರೀ ರವಿಶಂಕರರ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ವಿವಿಧ ಕಾರ್ಯಾಗಾರಗಳ ಮೂಲಕ ಹರಡುವ ಕಾಯಕಕ್ಕೆ ಬದ್ಧರಾಗಿದ್ದಾರೆ. ಸಮಕಾಲೀನ ಧಾರ್ಮಿಕ ಸಂಗೀತವನ್ನೂ ಪ್ರಪಂಚದಾದ್ಯಂತ ಕಳೆದೆರಡು ದಶಕಗಳಿಂದ ಅವರು ಪ್ರಸರಿಸುತ್ತಿದ್ದಾರೆ. ಈ ಕಾರ್ಯಭಾರವು ವಿಶ್ವಾದ್ಯಂತ, ಅದರಲ್ಲೂ ಯುವ ಸಮುದಾಯದ ಮೂಲಕ, ಅವರಿಗೆ ಜನಪ್ರಿಯತೆ ದೊರಕಲು ಕಾರಣವಾಗಿದೆ.
ಸಂಗೀತ ಲಾಂಛನ ಎಸ್.ಎಸ್.ಜೆ. ಪ್ರೊಡಕ್ಷನ್ಸ್ನ ಪ್ರಭಾವಳಿಯಲ್ಲಿ, ಸಾಹಿಲ್ ಜಗ್ತಿಯಾನಿ, ಸ್ವರ ಮಾಧುರ್ಯದ ೨೨ ಆಲ್ಬಂಗಳನ್ನು ಸಂಗೀತಾಭಿಮಾನಿಗಳಿಗಾಗಿ ಬಿಡುಗಡೆ ಮಾಡುವ ನವ ಪಯಣಕ್ಕೆ ಸನ್ನದ್ಧರಾಗಿದ್ದಾರೆ. ಸ್ವಂತ ಗಾಯನದ / ಕಲಾವಂತಿಕೆಯ ೧೭ ಸ್ಟುಡಿಯೋ ಆಲ್ಬಂಗಳನ್ನೂ, ನಿರೂಪಕ ಹಾಗೂ ಸಂಗೀತ ನಿರ್ದೇಶಕ ಸ್ಥಾನವನ್ನಲಂಕರಿಸಿ ೧೪ ಆಲ್ಬಂಗಳನ್ನೂ ಕಳೆದ ವರ್ಷಗಳಲ್ಲಿ ಬಿಡುಗಡೆ ಮಾಡಿದ ಆಳವಾದ ಅನುಭವ ಅವರ ಇಂದಿನ ಕಾರ್ಯಕ್ರಮಕ್ಕೆ ಉತ್ತೇಜನ ನೀಡುತ್ತಿದೆ.
ಎಸ್.ಎಸ್.ಜೆ. ಪ್ರೊಡಕ್ಷನ್ಸ್ನ ಸ್ಥಾಪಕ ಸಾಹಿಲ್ ಜಗ್ತಿಯಾನಿ ಭಕ್ತಿಪೂರ್ವಕವಾಗಿ ಹೇಳುವ ಮಾತಿದು: ಗುರುದೇವ ಶ್ರೀ ಶ್ರೀ ರವಿಶಂಕರರ ಅನುಗ್ರಹದಿಂದ ನನ್ನ ಬದುಕಿನಲ್ಲಿ ಆಶ್ಚರ್ಯಕರವಾದ ಬದಲಾವಣೆ ಏರ್ಪಟ್ಟಿದೆ. ಮಹತ್ತರವಾದ ಆ ಬದಲಾವಣೆಯ ಅನುಭವ ಸಂಗ್ರಹವನ್ನು ನನ್ನ ಸಂಗೀತದ ಮುಖಾಂತರ ವಿಶ್ವಾದ್ಯಂತ ಕೇಳುಗರೊಂದಿಗೆ ಹಂಚಿಕೊಳ್ಳುವುದು ನನ್ನ ಏಕೈಕ ಉದ್ದೇಶವಾಗಿದೆ.’
ಲಾಂಛನದ ಉದ್ಘಾಟನೆ ಮತ್ತು ಮಾರ್ಚ್ ೩ರ ಸಂಗೀತ ಸಂಜೆ ಕುರಿತು:
ಹೊಸ ಸಂಗೀತ ಲಾಂಛನ ಎಸ್.ಎಸ್.ಜೆ. ಪ್ರೊಡಕ್ಷನ್ಸ್’, ಆಧುನಿಕ ತಾಳವಾದ್ಯದ ಆರು ಪ್ರತಿಭಾವಂತರ ಸಹಯೋಗದೊಂದಿಗೆ, ’ವಂಡರ್-ನೌಎಂಬ ಶೀರ್ಷಿಕೆಯುಳ್ಳ ಆಂಗ್ಲ ಗ್ರಾಮೀಣ ಜಾನಪದ ರಾಕ್ ಸಂಗೀತ ಸಂಜೆಯೊಂದನ್ನು ಹಮ್ಮಿಕೊಂಡಿದೆ. ಈ ಸಂಗೀತ ಸಂಜೆಯನ್ನು ದಿನಾಂಕ ಮಾರ್ಚ್ ೩ರಂದು, ಕನಕಪುರ ರಸ್ತೆಯಲ್ಲಿರುವ ಶಂಕರ ಫ಼ೌಂಡೇಷನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಾಹಿಲ್ ಜಗ್ತಿಯಾನಿಯವರ ೨೨ನೇ ಸ್ಟುಡಿಯೋ ಆಲ್ಬಂ ಕೃತಿಗಳನ್ನು ವಂಡರ್-ನೌಸಂಗೀತ ಸಂಜೆಯು ಬಿಂಬಿಸಲಿದೆ. ಆಂಗ್ಲ ಮುಖ್ಯವಾಹಿನಿಗೆ ಈ ಸಂಗೀತ ಸಂಜೆಯ ಮೂಲಕ, ತಮ್ಮ ೨೦ ವರ್ಷಗಳ ಅನುಭವದಲ್ಲಿ ಮೊಟ್ಟಮೊದಲಿಗೆ ಸಾಹಿಲ್ ಜಗ್ತಿಯಾನಿ ಪಾದಾರ್ಪಣ ಮಾಡಲಿದ್ದಾರೆ. ರಾಕ್ ಸಂಗೀತಕ್ಕೆ ವಂಡರ್-ನೌಒಂದು ಹೊಸ ಆಯಾಮವನ್ನು ಒದಗಿಸಲಿದ್ದು, ಯುವಜನಾಂಗಕ್ಕೆ ಸ್ಫೂರ್ತಿದಾಯಕವೆನಿಸಲಿದೆ. ಯುವಕ-ಯುವತಿಯರು ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ಈಗಿಗಿಂತ ಹೆಚ್ಚಿನ ಸಂವೇದನೆಯನ್ನು ಹೊಂದಲಿದ್ದಾರೆ.
ಸಾಹಿಲ್ ಸಾಗಿದ ಹಾದಿ:
ಕಿಂಗ್ಸ್ ಕಾಲೇಜ್ ಆಫ಼್ ಲಂಡನ್ನ ಪದವೀಧರರಾದ ಸಾಹಿಲ್ ಜಗ್ತಿಯಾನಿ, ಯಥೇಚ್ಛವಾಗಿ ವಿಶ್ವಾದ್ಯಂತ ಆಧ್ಯಾತ್ಮಿಕ ಪ್ರವಾಸ ಮಾಡಿದ ಹಿನ್ನೆಲೆಯುಳ್ಳವರು. ಜಗತ್ತಿಗೆ ಅರ್ಥಪೂರ್ಣವೂ, ಆಪ್ಯಾಯವೂ ಆಗಿರತಕ್ಕಂಥ ಸಂಗೀತವನ್ನು ಅರ್ಪಿಸುವ ಉದ್ದೇಶವುಳ್ಳ ತಮ್ಮ ಸ್ವಂತ ಸಂಗೀತ ಲಾಂಛನ ಎಸ್.ಎಸ್.ಜೆ. ಪ್ರೊಡಕ್ಷನ್ಸ್ಗೆ ವಂಡರ್-ನೌಆಲ್ಬಂನ ಸೇರ್ಪಡೆಯೊಂದು ಅನನ್ಯವಾದ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸಲಿದೆ. ಸಾಹಿಲ್ ಜಗ್ತಿಯಾನಿ ತಮ್ಮ ನಿಜವಾದ ಸತ್ವ ಏನೆಂಬುದನ್ನು  ಅರ್ಥ ಮಾಡಿಕೊಂಡದ್ದು ತಮ್ಮ ೨೦ನೇ ವಯಸ್ಸಿನಲ್ಲಿ, ಗುರುದೇವ ಶ್ರೀ ಶ್ರೀ ರವಿಶಂಕರರ ಮಾರ್ಗದರ್ಶನದಿಂದ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸಂಗೀತದ ಬಗ್ಗೆ ಅಷ್ಟಿಷ್ಟು ಆಸಕ್ತಿ ಬೆಳೆಸಿಕೊಂಡಿದ್ದ ಸಾಹಿಲ್, ಗುರುಗಳ ಭೇಟಿಯ ತರುವಾಯ, ’ತಾವಿನ್ನು ಹಾಡಿದರೆ ಅದು ಗುರುಗಳ ಪ್ರೀತಿ ಮತ್ತು ಶಾಂತಿಯ ಸಂದೇಶದ ಪ್ರಸಾರಕ್ಕಾಗಿ ಮಾತ್ರಎಂಬ ನಿಲುವು ತಳೆದರು. ಪಾಪ್, ರಾಕ್ ಮತ್ತು ಟ್ರಾನ್ಸ್ ಆಲಿಸುತ್ತ, ನುಡಿಸುತ್ತ ಬೆಳೆದು ನಿಂತ ಓರ್ವ ಸಾಮಾನ್ಯ ವ್ಯಕ್ತಿ, ತನ್ನ ಅಸ್ತಿತ್ವಕ್ಕೆ ಅರ್ಥ ನೀಡಬಲ್ಲಂಥ ಸಂಗೀತ ನಿರೂಪಿಸಬಲ್ಲವನಾದದ್ದು ಆ ಸಂದರ್ಭದಲ್ಲೇ. ಸಾಹಿಲ್ ಸಂಗೀತದ ಸಂಯೋಜನೆಯು, ಪಾಶ್ಚಿಮಾತ್ಯ ಮತ್ತು ಭಕ್ತಿ ಶಿಕ್ಷಣದ ಬೇರುಗಳನ್ನು ಹೊಂದಿ, ಇಂದಿನ ಅಗತ್ಯಕ್ಕೆ ಅನುಗುಣವಾಗಿ ಸ್ಪಂದಿಸಲಾರಂಭಿಸಿತು. ಸಾವಿರಗಟ್ಟಲೆ ಯುವಜನರನ್ನು ಧ್ಯಾನ ಮತ್ತು ಮನ ಸೆಳೆಯುವ ಗಾನದೊಂದಿಗೆ ಪರಿವರ್ತಿಸಿ  ಸಾಹಿಲ್, ಬಹು ಬೇಗ ಆರ್ಟ್ ಆಫ಼್ ಲಿವಿಂಗ್ಪ್ರತಿಷ್ಠಾನದ ಯುವ ಚಿಹ್ನೆ ಎಂಬ ಗೌರವಕ್ಕೆ ಪಾತ್ರರಾದರು. ಅವರೋರ್ವ ಮುಂಚೂಣಿಯ ಗಾಯಕ, ಗಿಟಾರಿಸ್ಟ್, ನಿರೂಪಕ, ಸಂಗೀತ ನಿರ್ದೇಶಕ, ಕೀಬೋರ್ಡ್ ಕಲಾವಿದ, ಸೌಂಡ್ ಎಂಜಿನಿಯರ್ ಹಾಗೂ ಪ್ರೋಗ್ರಾಮರ್ ಎಂಬುದನ್ನು ಅವರ ಆಲ್ಬಂಗಳು ನಿರೂಪಿಸಲಾರಂಭಿಸಿದವು. ಅವರು ತಮ್ಮ ವಾದ್ಯ ತಂಡದೊಂದಿಗೆ  ಹೊರಟು ವಿಸ್ತೃತವಾಗಿ ರಷ್ಯಾ, ತೈವಾನ್, ಆಫ್ರಿಕ, ಹಾಂಕಾಂಗ್ ಮೊದಲುಗೊಂಡು ಅನೇಕ ದೇಶಗಳಲ್ಲಿ ಸಂಚರಿಸಿ ಮಾನವೀಯ ಮೌಲ್ಯಗಳ ಸಂಗೀತಪ್ರಸಾರಕ್ಕೆ ಕಾರಣರಾದರು. ಅವರ ಮೊಟ್ಟಮೊದಲ ಆಲ್ಬಂ ಅವತರಣ್: ಯುನೈಟ್ ವಿಥಿನ್ ಯುವರ್ ಸೆಲ್ಫ್’, ಟೈಮ್ಸ್ ಮ್ಯೂಸಿಕ್ ಸಹಯೋಗದೊಂದಿಗೆ ವಿತರಿಸಲ್ಪಟ್ಟು, ವಿಶ್ವಾದ್ಯಂತ ಒಂದು ಲಕ್ಷ ಪ್ರತಿಗಳು ಮಾರಾಟವಾದ ಆಲ್ಬಂಗಳ ಪಟ್ಟಿಯನ್ನು ಸೇರಿತು.
ಎಸ್.ಎಸ್.ಜೆ. ಪ್ರೊಡಕ್ಷನ್ಸ್ ಕುರಿತು:
ಎಸ್.ಎಸ್.ಜೆ. ಪ್ರೊಡಕ್ಷನ್ಸ್ನ್ನು  ಸಂಗೀತಕ್ಕೆ ಸಂಬಂಧಿಸಿದ ಸಮಸ್ತ ಅಗತ್ಯಗಳನ್ನೂ ಪೂರೈಸಬಲ್ಲ ಏಕ ಗವಾಕ್ಷಿಯೆಂದು ಕರೆದರೆ ಉತ್ಪ್ರೇಕ್ಷೆಯಾಗಲಾರದು. ನಾದ ವೈಖರಿ ಯಾವುದಾದರೂ ಸರಿ, ಅಗತ್ಯ ಸೌಲಭ್ಯಗಳು ಅಲ್ಲಿವೆ. ಜಾಹಿರಾತು ಚಲಚ್ಚಿತ್ರಗಳ ಸಂಗೀತ, ಮ್ಯೂಸಿಕ್ ಆಲ್ಬಂ ರೆಕಾರ್ಡಿಂಗ್, ಫಿಲ್ಮ್ ಸ್ಕೋರಿಂಗ್, ಥೀಂ ಸಾಂಗ್ಸ್, ಮಾಸ್ಟರಿಂಗ್ ಆಡಿಯೋ, ವೋಕಲ್ ಎನ್ಹಾನ್ಸ್ಮೆಂಟ್, ಸೆಷನ್ ವರ್ಕ್ ಹಾಗೂ ೫.೧ ಸರೌಂಡ್ ಸೌಂಡ್ ಫಿಲ್ಮ್ ಸಾಂಗ್ಸ್ ಮುಂತಾಗಿ ಯಾವ ಕೆಲಸವಾಗಿದ್ದರೂ ನಮಗೆ ವಹಿಸಿ ಸಮಯ ನಷ್ಟದಿಂದಲೂ, ಹತ್ತು ಕಡೆ ಅಲೆಯುವ ಪ್ರಮೇಯದಿಂದಲೂ ತಪ್ಪಿಸಿಕೊಳ್ಳಬಹುದು. ಕಲಾವಿದರು ತಮ್ಮ ಕಲಾಕೃತಿಗಳ ಆನ್ ಲೈನ್ ಮಾರಾಟಕ್ಕೆ ಅಗತ್ಯವಾದ ಆಪ್ಸ್ ಕ್ಷಿಪ್ರ ತಯಾರಿಕೆ ಸಂಬಂಧವಾಗಿಯೂ ನಮ್ಮನ್ನು ಸಂಪರ್ಕಿಸಬಹುದು.
ಗಿರಿ ಟ್ರೇಡಿಂಗ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ನೊಂದಿಗೆ ಎಸ್.ಎಸ್.ಜೆ. ಪ್ರೊಡಕ್ಷನ್ಸ್ನ ನಿಕಟ ಸಹಯೋಗ ಹೊಂದಿದೆ. ಇದು, ’ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’, ’ಮನೋರಮಾ ಮ್ಯೂಸಿಕ್”, ’ಇನ್ರೆಕೋ ಅಂಡ್ ಆರ್ಟಿಸ್ಟ್ಸ್ ಇನ್ಕ್ಲೂಡಿಂಗ್ ಇಂಡಸ್ ಕ್ರೀಡ್ಮುಂತಾದ ಸಂಸ್ಥೆಗಳ ಆಪ್ಸ್ ತಯಾರಿಕೆ ಮತ್ತು ಮಾರಾಟವನ್ನು ಹಿಂದಿನ ವರ್ಷಗಳಲ್ಲಿ ಸಾಹಿಲ್ ಜಗ್ತಿಯಾನಿಯವರು ನಿರ್ವಹಿಸಿ ಹೊಂದಿರುವ ಅನುಭವದ ಫಲಶ್ರುತಿ.
ನೀವು ಹೊಂದುವ ಸೇವೆಗೆ ಬೋನಸ್ ಎಂಬಂತೆ ಎಸ್.ಎಸ್.ಜೆ. ಪ್ರೊಡಕ್ಷನ್ಸ್ಒದಗಿಸುವ ಉಚಿತ ಆಪ್ ಅತ್ಯಂತ ಜನಪ್ರಿಯ. ಉದಾಹರಣೆಗೆ, ಸ್ವಂತ ಉಪಯೋಗಕ್ಕಾಗಿ ’ಎಸ್.ಎಸ್.ಜೆ. ಪ್ರೊಡಕ್ಷನ್ಸ್ಬಿಡುಗಡೆ ಮಾಡಿರುವ ’ಆಪ್’ನ ಡೌನ್ ಲೋಡ್ ಸಂಖ್ಯೆ ೫ ಲಕ್ಷವನ್ನು ದಾಟಿದೆ. ಗೂಗಲ್ ಪ್ಲೇ ಮತ್ತು ಯುಟ್ಯೂಬ್ ಪ್ರಿ-ರಿಲೀಸ್ ವಿಡಿಯೋಗಳ ವೀಕ್ಷಕರ ಸಂಖ್ಯೆ ಒಂದು ಲಕ್ಷವನ್ನು ದಾಟಿದೆ. ನಮ್ಮ ಸೇವೆಯನ್ನು ಅಪೇಕ್ಷಿಸುವವರಿಗೂ ಇಂಥ ಲಾಭ ಪ್ರಾಪ್ತವಾಗಲಿ. ನಮ್ಮನ್ನು ಕೂಡಲೇ ಸಂಪರ್ಕಿಸಿ, ಆಕರ್ಷಕ ಬೆಲೆಯಲ್ಲಿ ನಮ್ಮ ಸೇವೆಯ ಲಾಭವನ್ನು ಪಡೆಯಿರಿ.

ಸಂಪರ್ಕ ವಿಳಾಸ: Sahil Jagtiani, # S 306 Soudhamini Apartments, Kanakapura Road, Udayapura, Bangalore – 560 038. ದೂರವಾಣಿ: 9986086860

ಬುಧವಾರ, ಡಿಸೆಂಬರ್ 23, 2015

Astrology and prediction

At a glance 



Astrology is the ancient science, and prediction is the innovative trend applicable to our present times. Successful astrologers are only those who witness divine in the science as well as their prediction. Virendra Kumar is one of the best astrologers I came across in my life so far.





First attention




Go through what Virendra Kumar has to say about the path that has led him towards the peaks of his profession, in his own words:




Russian literature





At that time the political and social scenario was dominated by socialism and communism so much so that the Indian foreign policy was tilted towards USSR proficiency. We then believed Russian literature as a mark of wisdom and harbinger of revolutionary ideology in the youth. Theories of Karl Marx were praised even in general discussions.








Ridicule

Religious minded Indians were ridiculed in general. Our rituals and theories of spiritualism were considered as irrelevant, though even before Karl Marx there were learned scholars like Charwaks, who denied the existence of God. There was no unified church for those, who did not believe in God. However it was Karl Marx, who provided such a church.


Marx theory



According to Karl Marx, only matter existed. Even the existence of mind was considered to be a product of matter. Scientists of that day agreed with this notion. In such an environment, astrology was generally ridiculed as nonsensical and superstitious.







Metals and non-metals



One day I was sitting in my chemistry class, where the teacher was explaining information related to periodic table of metals and non-metals. The properties of metals existing were described by scientific formulation.





Rishi Bhrigu’s literature



The table also described the properties of those metals yet to be discovered, simply by looking at their position in the table. While pursuing it, instantly, the story of Rishi Bhrigu flashed in my mind. A Rishi who compiled an ever green literature, in which there is a way to walk into the past, present and future times.






Counter the confusion


‘Can anything be done with the combination of Rishi Bhrigu’s literature and the periodic table of metals, to help people when they are confused about what to do and not to do?’ – I asked myself.




Veda exponents


I began to explore astrology that involved a long journey across the lengths and breadths of India, and my consultation with a number of sages and Veda exponents. The knowledge about the fundamentals followed by our Rishis became clear and clearer to me, as I dwelled more and more into the astonished.



Epoch journey



It has been 40 years since I started my epoch journey in astrology, and today I am happy to note that the contemporary science is also opening its gates to Vedic understanding of universe. There will be my sincere attempt to provide more clarity on this, in my forthcoming literature


.

Mantras and Yantras


I have decided after such a long period of research, to serve the people to improve their quality of life through an understanding of their potentials via their astrological charts, with the help of meta-physical forces of Mantras and Yantras to reduce negative effects emerging from the planets. I am sure, the positive impact of meta physical forces will be immense, on a person’s life.



ಶುಕ್ರವಾರ, ಡಿಸೆಂಬರ್ 11, 2015

Let your business take-off at Daev Nest

Many eye-brows went up, when our friend Mahadev recently opened a business center entitled 'Daev Nest', on fifth floor of Barton Center, diagonally opposite to Metro Railway Station, Mahatma Gandhi Road, Bengaluru - India. The envy perhaps was due to the concern he has, towards the customers who intend to use his premises for business purposes. Cabins and work-stations anywhere else cannot be better than what you witness, in the said premises. A right ambiance to concentrate on measures of fast popularity!


Start-up companies benefit by many bounds through the facilities Mahadev is capable to offer. First of all, it the fastest internet, enabling video conferences. Needless to explain positive advantages like money and time savings, instant business proceeds etc., which all are likely to happen in the course of video conferences.
Next is Mahadev himself. He is not just a provider of hospitality services. He is a mobile knowledge bank. Ask for anything related to any business start-up, to find him ready to guide you and thereby help you to save your time and money.


You can imagine the impact of having the Metro Railway Station at a stone's throw away. Fast movement of information and goods of any volume, within a shortest time gap.
Location of Daev Nest will speak in volumes, for the success of those who set up a business connection over there. Best business connection, for even those who cannot be physically present everyday, in the premises. Just opt to utilize Daev Nest as your mailing address and save a lot of money. It's enough to benefit by mere use of the conference room for meetings over there!

You do not need computers or the staff members working for you, to handle your daily mail exchange. Just have a business connection at Daev Nest and see the superior manner in which the crucial activity is being carried out. Experts over there will listen to you smilingly and patiently, understand your requirements thoroughly, and provide you the doc that has a get-up beyond your imagination. Word docs, spreadsheets, power point presentations, blog creations and graphic designs are no problem for them. Your word-of-mouth instruction is enough for them to work on those, as fast as possible.

Entities with factories on outskirts of Bengaluru are welcome to choose Daev Nest, as their city central office. If they hire a cabin and a work-station, their purpose would no doubt be served immensely. Skeleton staff of such entities, with the support Mahadev's computer operators, will be able to complete mammoth tasks successfully.
It is time for aspirants of a successful business to hire Daev Nest as their mailing address or a conference point or a cute city office. It is better to be fast to get in touch with Mahadev on his cellphone #s 9620067800 or 7259093200, before it's exhaust!

Your contact attempts are as important for Mahadev, as they are for you. As such, please ensure that they do not get lost, amidst the abnormal number of commercial calls these days. Ensure that you introduce yourself to him through an SMS, so that he saves your #, before his telecom with you.

Daev Nest's diversified services begin with the astrological and Vaastu Solutions, originating from India's best Jyotishi Veerendra Kumar, whose predictions related to Career, Business, Marriage and Love-Life are globally acclaimed. His Delhi office is always packed with people seeking the divine suggestions to varying problems in life. He is prepared for a regular visit and longer stays in Bengaluru, if there could be a similar rush of seekers. For appointments, his mobile #s 08860922056 and 09999046034 will be active 24/7. 


Mrs India Karnataka contest, proposed to be held at Orion Mall (Brigade Gateway, # 26/1, Dr Rajkumar Road, Malleshwaram West, Rajaji Nagar, Bengaluru - 560055), is the latest addition to endeavors of Dev Nest.
Interested people are welcome to be here to sponsor (Rs 50000/- and above) the said event, or buy ticket (Rs 1500/- and above) to watch it, at the venue on January 21, 2017, between 6.00 PM and 10.00 PM.

ಭಾನುವಾರ, ನವೆಂಬರ್ 22, 2015

My NaNoNovel


Employment as a correspondent, carried out with enthusiasm, will help us to find an early recognition in professional life. Presuming such recognition will be a reality in five years in any other profession; we can easily say it’ll be on our way within a year, if we serve for the media.
An individual’s image in the media could even help him or her to play with a variety of choices, when it comes to lifetime decisions like marrying.
No wonder if press reporters, during the course of their assignments, come across marriage proposals from architects, doctors and other professionals. They may reject those, but more proposals continue to be there non-stop, till they marry.
In comparison, let us look at laymen who try to marry-off their children (who could be doctors, advocates, businessmen and so on), by registering their names in matrimony websites:
They shell down a fortune for such registration, presuming that they will be able to identify the best match for their son or daughter. What happens after registering according to the latest trend, for example as a vegetarian family interested in alliance with another vegetarian family?
They will be allowed to have 30 phone numbers to start their communication. Going through those, the average rejection will be: For no reason from ten numbers, for horoscope not matching ten numbers and for the sub-caste not matching the remaining ten numbers!
When they say nothing clicked and request for more phone numbers, the matrimony site suggest them in turn to pay more money and become a premium member! When the problem of ‘sub-caste not matching’ is cited, they will be demanded to register in a separate sub-caste website, by again paying a few thousand rupees more!!!
There could be occasions, people pretending to be interested in alliance land up for lunch or dinner, claiming that a personal visit will help the two families to know each other better! The guests of course refrain to say ‘yes’ or ‘no’ to the alliance, either on the spot or after they go back to their home!
Other than the above, registrants receive daily list of ten matching profiles, who hardly respond when contacted. Daily list mailing service stops after a short period of time for want of renewal. Renewal results in nothing other than repetition of the above!
Cycle of the said phenomenon will be in force till you’re fed up and say, ‘Sorry friend, no more renewals!’, though the matrimony websites never ever stop pestering, to get your registration renewed.
Once the above lines are convinced, I think there will be a keenness to know how main character of my NaNoNovel 'Whom to marry?', correspondent of a weekly magazine, weighed and rejected nine top class proposals she came across in her career, and remained in demand even after that.

This novel is likely to relate fifty percent of its content towards the Art of Living, while the remainder is expected to be shared by thirty and twenty percent respectively by journalism and matrimony. 

It's not too late to enter the 'write a new novel' challenge! If you register it on link http://nanowrimo.org/ today, you end up composing as little as 6250 words per day!!!

ಗುರುವಾರ, ನವೆಂಬರ್ 5, 2015

Four Lies Writers Believe

'I’ve been teaching and coaching writers for four years through the Write Practice. I did the math recently and realized that in the last twelve months, we’ve helped over 2.5 million people become better writers. As a writer and ghostwriter of four books myself, I’ve learned that there are a few common lies that writers tell themselves.' - It's an authoritative statement of Joe Bunting, the World # 1 NaNoWriMo Fan. 
His script below will explain how Writers' Announcements 1, 2, 3 and 4 cannot be a reality. 

Annoncement 1

“I’ll write a book some day.”

If not now, when?

Most people say things like, “I want to write a book,” or even, “I’m working on a book.” I’ve said the same things. But how many people actually write one?

What if you never finish your books? What if you die with your books still trapped inside of you? And here’s a terrifying thought: 

Most people do die with their books unwritten. This happens all the time. Will you be one of them?

You have a chance to write your book. Isn’t it time you do it?

Writing a book is hard, but if you create a plan and stick with it, you will finish.

(Of course, sticking with it is really the hardest part. But that’s where a community comes in. More on that in a moment, though.)


Annoncement 2

“You can’t make any money as a writer.”

Yes, historically there were writers who were very poor, like Edgar Allen Poe and Herman Melville.

But some writers were also very rich, like J.K. Rowling, Earnest Hemingway, and Dr. Seuss.

Writers are just people, and people come in all shapes, sizes, and net worth.

I know many people who have made successful careers off their writing. Carlos Cooper, a friend and former contributor to The Write Practice, started writing regularly just a few years ago, and now makes his full-time living off his writing.

When I started writing professionally a few years ago, I made less than $10,000 the first year. Now, I’m able to support myself and my family with my words.

Making writing a career, not just a hobby, is possible, and in some ways it’s easier than ever. Don’t believe the lie that you can’t make money as a writer.

Annoncement 3

“It’s just too hard.”

Yes, writing is hard, but plenty of people do it every day. People who are less intelligent than you have done it. People who aren’t as talented as you have done it. You can do it, too.

Is writing really too hard? Or is this a lie you tell yourself out of self-sabotage?

If you’ve ever felt like writing was just too hard, that you just lack the willpower or the talent or the discipline, then you’re not alone. Even writers who have been writing for years feel like this sometimes.

Earlier this week, I was talking to a successful, best-selling author who was questioning his entire career. 

Your job is to not figure out what you’re legacy is going to be. Your job is to do the work.

Annoncement 4

“I can do this on my own.”

The truth is most writers never finish their books. We’re in the first week of NaNoWriMo, when hundreds of thousands of people attempt to write a book in just a month.

However, less than eleven percent of people who start NaNoWriMo complete their projects. What’s the difference between those who finish and those who don’t?

Perseverance, of course, but there’s an often-overlooked secret that successful writers have been using for centuries. Hemingway used it. Tolkien used it. Mary Shelley, the author of Frankenstein, used it.

It’s community.


.

“It takes a village to raise a child,” said Toni Morrison. In the same way, it takes a community to birth a book.

That’s why I created Becoming Writer. When I started writing, it took a community of people to help me finish my work.

For seven years, I aspired to be a writer but never finished anything. Then something changed, and in the past four years, I’ve published more than a thirty articles literary journals, national magazines, and newspapers, started one of the most popular writing sites in the world, and written or ghost-written four books.

What was the difference?

Community.



You might be thinking, No. That might be true for some people. But I can handle this on my own. I don’t need encouragement or help. I just need a great idea, a blank page, and some extra time.

To that, I say, “Ok. Good luck with that.”

Because you’ve probably tried to do that before already. You’ve probably had that great idea before,and never finished writing the book.

Why do you think this time is going to be different?

- Joe Bunting

ಬುಧವಾರ, ಸೆಪ್ಟೆಂಬರ್ 23, 2015

Kemmanagundi wild ventures: A project open for joint development

It is a matter related to my neighborhood, conveyed to me by Jonathan Couture, who lives close to the north pole and owns the renowned entity Mulligore Production.

Live in Wild Resort

Kemmanagundi, the famous hill station known to people for its panoramic view of mountains, cascading water falls and lush greelen vegetation, is surely a great break for heavily crowded and congested city dwellers.

For the tourists heading towards Kemmanagundi along the road from Tarikere, the spot selected for 'Live in Wild Resort' is an attracion. They stop there for a while, quench their thirst with the perennial water flow available there and proceed further. Enough indication the said resort, when operational, will be the most popular in the vicinity.

Accessibility

'Live in Wild Resort' will be a reality on Sy #s 20 and 21, Thigada grama, Lingadahalli Hobli, Tarikere Taluk, Chickamagaluru District, Karnataka - India.

It is owned by K M Anees ul-Haq (# 47, 2nd Cross, Vivekananda Nagar, Bangalore-560033; Cell #: 09448473515), former senior officer, AIR and Doordarshan in the Ministry of Information & Broadcasting, Government of India. He has wide experience in tourism industry (in the states of Rajasthan, Jammu & Kashmir besides the strategic Agra), study of history and eco-culture. The project comprising 30 huts has been approved by Karnataka State Tourism Department, in support of Eco-Tourism. Ten acres of land has been converted for the purpose. Estimated cost of the project is 15Crs. Those who intend to be in touch with this project are requested to call M M Dev on Cell #s 91-7259093200, 91-9620067800 or message their purpose of contact through an SMS or e-mail to drmmd.intimate@gmail.com

It will be 270km away from Bengaluru, 40km from Chickamagaluru, 32km from Tarikere, 30km from Birur, 120km from Kudremukh and will be situated on an altitude of 1434mts/4704ft above mean sea level.

Facts


Kemmanagundi has been the summer retreat of Krisnaraja Wodeyar-4, the Maharaja of erstwhile State of Mysore. It is also known as K R Hills, after the Wodeyar king. Now it is the summer resort for Governor of Karnataka, just 7km away from the proposed 'Live in Wild Resort'.

Quite peaceful, serene, nesting amidst lush green forest and Coffee plantations, it is sure to revive and rejuvinate individuals physically, mentally and spiritually. Ringed by the Baba Budangiri ranges, blessed with silver cascades, mountain streams, dense growth of trees and plants, Kemmanagundi's beautifully laid out ornamental gardens, enchanting mountains and valley views are a treat to the eye.

The spectacular sunset view from the Raj Bhavan is a photographer's delight. For youths adventurous at heart, Kemmanagundi offers many peaks to scale and intricate jungle paths to explore.

Hebbe Falls


A trek from Kemmanagundi along a steep and narrow path leads to sprightly twin-fall surrounded by dense forests as well as coco and coffee plantations. Said water waterfall rushing down to a depth of 250ft in two stages is fondly named as 'Hebbe Falls'. This location is just 18kms away from the proposed 'Live in Wild Resort'.

Baba Budangiri range



The 1985mts/6220ft high peak takes its name from the sufi saint Baba Budan, who brought coffee seeds from Arabia, sowed and lived here. Situated in the Baba Budangiri is the Inam Dattatreya Peetha, venerated by Muslims and Hindus alike. This shrine is 25kms away from the proposed 'Live in Wild Resort'.





Shanti Falls


This waterfall separates the proposed 'Live in Wild Resort' from forest. A five-kms trek in the jungle along the stream intoxicates the adventure.

Silent valley




You witness this natural wonder just down the proposed 'Live in Wild Resort'. Tourist at this spot, cannot even hear the sound of a big blast happening on road 200ft above. Tall trees and flow of the stream provide the magical effect.

Ballavara




Setting of this town directly resembles a typical town's description in R K Narayan's novel. Agriculture, main occupation of Ballavara, simply adds up to natural blending of the beautiful landscape.



Lingadahalli




Point of specific interest in this town is a Hoysala temple, that dates back prior to the world famous temples of Halebidu and Belur. Lingadahalli is 14kms away from the proposed 'Live in Wild Resort'.

Belur and Halebidu 



These two historic capitals of Hoysala are situated within a stretch of 65kms from the proposed 'Live in Wild Resort'. Belur, best known for Chennakeshava temple complex (Built in 1116 A C to commemorate Hoysala Visnuvardhana's victory over Cholas. Facade filled with intricate sculptures, freezed with no portion left blank, it took 103 years to construct this temple), could be reached after drive of 40kms. The gorgeous twin Shiva temple in Halebidu is equipped with two sanctum sanctoriums (one beside the other), a common platform and a common broad navaranga.

Bhadra reserve and river

Bhadra river is situated in the midst of western ghats, in the districts of Shimoga and Chickamagaluru in Karnataka. The reserve is surrounded by lofty hill range of Baba Budangiri, that includes peaks like Hebbagiri, Gaganagiri and Mullayyanagiri (6316ft above mean sea level, tallest in Karnataka). Bhadra dam is at Lakkavalli, is 40kms away from the proposed 'Live in Wild Resort'.

Main Flora: Reserve has identified 120 species. Important medicinal plants are in plenty. Sandal, Teak, Rose wood, Mathi, Honne, Nandi, Kindal etc are some of the other species.

Main Fauna: Tiger, leopard, elephant, Indian bison, sambar, barking deer, spotted deer, wild dog, wild bore, sloth bore etc.

Other must see places: Amruteshwara temple (40kms away), Ayyana kere (a vast lake, 70kms away) and Ratnagiri (a park in the forest, with climate known to refresh body and soul).